ನಾಳೆ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಶ್ರೀ ಗೌರಿ- ಗಣೇಶೋತ್ಸವ

ವಾಮದಪದವು: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರ್ಷದ ಶ್ರೀ ಗೌರಿ- ಗಣೇಶೋತ್ಸವವು ಸೆಪ್ಟಂಬರ್ 10ರಂದು ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ, 9.30ಕ್ಕೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠೆ, 10ಕ್ಕೆ ಗಣಹೋಮ, ಅಪರಾಹ್ನ 12ಕ್ಕೆಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ.
ಬಳಿಕ ಭಜನಾ ಕಾರ್ಯಕ್ರಮ, 3.30 ಕ್ಕೆ ಧ್ವಜಾವರೋಹಣ, ವಿಸರ್ಜನಾ ಪೂಜೆ ನಡೆದು 5ಗಂಟೆಗೆ ಮೂರ್ತಿಯ ಜಲಸ್ಥಂಬನಗೊಳಿಸಲಾಗುತ್ತದೆ.
ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

✍?ಗೋಪಾಲ ಅಂಚನ್
ಯುವಧ್ವನಿ ನ್ಯೂಸ್