ಬಣ್ಣ – 2020 ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ

ಬಂಟ್ವಾಳ:   ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು ವತಿಯಿಂದ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ "ಬಣ್ಣ - 2020"ಇದರ ಬಹುಮಾನ ವಿತರಣಾ ಕಾರ್ಯಕ್ರಮವು ಮಂಚಿಯ ಲಯನ್ಸ್ ಕ್ಲಬ್ಬಿನಲ್ಲಿ ಜರುಗಿತು. ಸಮಾಜ ಸೇವಕ ಲ. ಡಾ. ಗೋಪಾಲಾಚಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಚಿತ್ರಕಲೆಯು ಶೈಕ್ಷಣಿಕ ವ್ಯವಸ್ಥೆಯೊಳಗಡೆ ತೀರಾ ಆವಶ್ಯಕವಾಗಿರುವ ವಿಷಯವಾಗಿದ್ದು ಮನಗಾಣುವ ಮನಸ್ಸುಗಳು ಇದ್ದಾಗ ಮಾತ್ರ ಅದು ಫಲಪ್ರದವಾಗುತ್ತದೆ. ಬಹಳ ಪ್ರೀತಿಯಿಂದ ಚಿತ್ರಕಲೆಯನ್ನು ಆಸ್ವಾದಿಸಿದರೆ ಜೀವನಾನಂದವಾಗುತ್ತದೆ ಎಂದರು.  ಪ್ರಶಸ್ತಿ ವಿಜೇತ ಮಕ್ಕಳಿಗೆ  ಬಹುಮಾನ ನೀಡಿ ಗೌರವಿಸಲಾಯಿತು. ಪಾಲ್ಗೊಂಡ ನೂರಕ್ಕೂ ಅಧಿಕ ಮಕ್ಕಳು ಪ್ರಮಾಣಪತ್ರ  ಮತ್ತು ಬಹುಮಾನ ಪಡೆದು ಸಂಭ್ರಮ ಪಟ್ಟರು.



ಬಹುಮಾನದ ಪ್ರಾಯೋಜನೆಯನ್ನು ಕುಕ್ಕಾಜೆಯ ನ್ಯೂ ಸ್ಟಾಪ್ ಅಂಡ್ ಶಾಪ್ ಸೂಪರ್ ಮಾರ್ಕೇಟಿನ ಮಾಲಕ ಎ. ಅಶ್ರಫ್ ಕುಕ್ಕಾಜೆ ನೀಡಿದ್ದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಕೊಟ್ಟಾರಿ, ಶಾಲಾ ಮುಖ್ಯೋಪಾಧ್ಯಾಯ ವಿ. ಶ್ರೀರಾಮ ಮೂರ್ತಿ ಮಕ್ಕಳಿಗೆ ಶುಭಾಶಯ ಕೋರಿದರು.
ಶಾಲಾ ಶಿಕ್ಷಕಿಯರಾದ ಶಾಂತ, ಗೀತಾ, ಪ್ರೇಮಲತಾ ಉಪಸ್ಥಿತರಿದ್ದರು. ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ಸಂಯೋಜಿಸಿದ್ದರು.