ಶ್ರೀ ಕ್ಷೇತ್ರ ಕಾರಂಬಡೆ ಜೀರ್ಣೋದ್ಧಾರ- ಖಾವಂದರಿಗೆ ಮನವಿ


ಬಂಟ್ವಾಳ: ಕಾರಂಬಡೆ ಶ್ರೀ ಮಹಾಮ್ಮಾಯಿ‌ ಕ್ಷೇತ್ರವು ಪುನರ್ ನಿರ್ಮಾಣಗೊಳ್ಳುತ್ತಿದ್ದು ಈ ಬಗ್ಗೆ ಕ್ಷೇತ್ರದ ನಿಯೋಗವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಕ್ಷೇತ್ರದ ಬಗ್ಗೆ ಮಾಹಿತಿ ಪಡೆದ ಹೆಗ್ಗಡೆಯವರು ಕ್ಷೇತ್ರಕ್ಕೆ ಆರ್ಥಿಕ ನೆರವು ನೀಡುವುದಾಗಿ ಹೇಳಿದರು

.
ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಅರುಣ್ ಕುಮಾರ್, ಹರೀಶ್ ಕೋಟ್ಯಾನ್, ನಾಗೇಶ್ ದರ್ಬೆ, ಜಯಶಂಕರ ಕಾನ್ಸಾಲೆ, ಯಶವಂತ ಕಾರಂಬಡೆ ಮೊದಲಾದವರು ನಿಯೋಗದಲ್ಲಿದ್ದರು.