ಪಾಂಗಲ್ಪಾಡಿಯಲ್ಲಿ ಶಾಸಕರ ಕೊಡುಗೆಯ ಸಾರಿಗೆ ಸುರಕ್ಷಾ ಅಂಬುಲೆನ್ಸ್ ನಿಂದ ಉಚಿತ ಆರೋಗ್ಯ ತಪಾಸಣೆ

ಯುವಧ್ವನಿ ನ್ಯೂಸ್, ವಾಮದಪದವು:
ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡುಗೆಯಾಗಿ ನೀಡಲಾದ ಸಾರಿಗೆ ಸುರಕ್ಷಾ ( ಸಂಚಾರಿ ಐಸಿಯು) ಆ್ಯಂಬುಲೆನ್ಸ್ ಗುರುವಾರ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿಗೆ ಆಗಮಿಸಿತು.


ವಾಹನದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳಿದ್ದು ಪರಿಸರದ ಜನರ ಶುಗರ್, ಬಿಪಿ ಮತ್ತಿತರ ರೋಗಲಕ್ಷಣಗಳ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.


ಗ್ರಾಮ ಪಂಚಾಯತು ಸದಸ್ಯರಾದ ರವಿರಾಮ್ ಶೆಟ್ಟಿ ಕಂಚಾರು, ವಾಸು ಪಾಂಗಲ್ಪಾಡಿ ಮೊದಲಾದವರಿದ್ದು ಸಹಕರಿಸಿದರು.

………………………….
ಸ್ನೇಹಿತರೇ..ಯುವಧ್ವನಿ..ಇದು ನಮ್ಮೂರಿನ ಸುದ್ದಿ ವಾಹಿನಿ. ಕಳೆದ 22 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ತೊಡಗಿಸಿಕೊಂಡಿರುವ ನಾನು, ಗ್ರಾಮೀಣ ಪ್ರದೇಶದ ಸುದ್ದಿಗಳಿಗೆ ಹೆಚ್ಚು ಒತ್ತು ನೀಡಬೇಕು ಮತ್ತು ಗ್ರಾಮೀಣ ಭಾಗದ ಪ್ರತಿಭಾವಂತರು ಹಾಗೂ ಸಾಧಕರನ್ನು ನಾಡಿಗೆ ಪರಿಚಯಿಸಬೇಕು ಎಂಬ ದೃಷ್ಠಿಯಿಂದ ಕಳೆದ ವರ್ಷ ನನ್ನದೇ ಆದ ಯುವಧ್ವನಿ.ಕಾಂ. ಎಂಬ ವೆಬ್ ನ್ಯೂಸ್ ಪೋರ್ಟಲ್ ಅನ್ನು ಆರಂಭಿಸಿದ್ದೇನೆ.
ಸಧ್ಯಕ್ಕೆ ಯಾವುದೇ ಮೂಲ ಬಂಡವಾಳ ಇಲ್ಲದೆ ಈ ಸುದ್ದಿ ವಾಹಿನಿ ನಡೆಯುತ್ತದೆ.
ಮುಂದಕ್ಕೆ ನೀವು ನೀಡುವ ಜಾಹೀರಾತಿನಿಂದಲೇ ಇದನ್ನು ಮುನ್ನಡೆಸಬೇಕಾಗಿದೆ. ಈ ಯುವಧ್ವನಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಬೇಕು ಎನ್ನುವುದು ನಮ್ಮ ಉದ್ಧೇಶ. ಬನ್ನಿ….ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಪಯಣದಲಿ ಜತೆಯಾಗಿ ಸಾಗೋಣ…
ಯುವಧ್ವನಿಯ ಚಂದಾದಾರರಾಗಿ, ಜಾಹೀರಾತುದಾರರಾಗಿ ನಮ್ಮನ್ನು ಬೆಂಬಲಿಸಿ…

ನಿಮ್ಮವನೇ…
ಗೋಪಾಲ ಅಂಚನ್
ಸಂಪಾದಕರು
ಯುವಧ್ವನಿ ನ್ಯೂಸ್,ವಾಮದಪದವು
9449104318