ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾಗಿ ಕೆ.ಲಕ್ಷ್ಮೀನಾರಾಯಣ ಉಡುಪ ಆಯ್ಕೆ

ಬಂಟ್ವಾಳ: ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು.
ಸಹಕಾರಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವಿಶ್ವನಾಥ ಚೌಟ, ನಿರ್ದೇಶಕರುಗಳಾಗಿ ಸುಂದರ ನಾಯ್ಕ್, ಎಂ.ಪಿ.ಶೇಖರ್, ಅಬ್ದುಲ್ ರಜಾಕ್, ಸದಾಶಿವ ಶೆಟ್ಟಿ, ಡೀಕಯ, ಶಂಕರ್ ಶೆಟ್ಟಿ ಬೆದ್ರ್ ಮಾರ್, ಸುದೀಂದ್ರ ಶೆಟ್ಟಿ, ಸುಚೀಂದ್ರ ಶರ್ಮ, ಮಾಲತಿ, ಪುಷ್ಪಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎ.ಆರ್.ಅಧಿಕಾರಿ ಗೋಪಾಲ್ ಆಯ್ಕೆ ಪ್ರಕ್ರಿಯೆ ನಡೆಸಿದರು.