ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿ, ನ.1ರಂದು ಉದ್ಘಾಟನೆ- ಸಮಾಲೋಚನಾ ಸಭೆ

ವಾಮದಪದವು: ನೂತನವಾಗಿ ಅಸ್ಥಿತ್ವಕ್ಕೆ ಬಂದ ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿಯು ನವಂಬರ್ 1ರಂದು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಯ ಬಗ್ಗೆ ಸಮಾಲೋಚನಾ ಸಭೆಯು ಭಾನುವಾರ ವಾಮದಪದವು ಸಹನಾ ಕಾಂಪ್ಲೆಕ್ಸಿನಲ್ಲಿ ನಡೆಯಿತು.
ವಾಮದಪದವು ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರ ಕೋರಿದರು.


ಲಯನ್ಸ್ ಜಿಲ್ಲಾ ಪ್ರಮುಖರಾದ ಶಿವಾನಂದ ಬಾಳಿಗಾ, ಲಕ್ಷ್ಮಣ್ ಕುಲಾಲ್, ಸಿರಿಲ್ ಡಿಸೋಜ, ಉಮೇಶ ಆಚಾರ್ಯ, ಜಗದೀಶ್ ಅವರು ಕಾರ್ಯಕ್ರಮದ ಯಶಸ್ವಿ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.


ಉದ್ಘಾಟನಾ ಸಮಾರಂಭದಲ್ಲಿ ಗೌರವಾರ್ಪಣೆ, ಅನಾರೋಗ್ಯ ಪೀಡಿತರಿಗೆ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಬಗ್ಗೆ ಚರ್ಚಿಸಲಾಯಿತು.
ಲಯನ್ಸ್ ಕ್ಲಬ್ ಸ್ಥಾಪನೆಯ ಪ್ರಮುಖರಾದ ರಮೇಶ ಶೆಟ್ಟಿ ಬಜೆ, ಕೋಶಾಧಿಕಾರಿ ಹಂಝ ಎ.ಬಸ್ತಿಕೋಡಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಲಾದ್ರೂ ಮೆನೇಜಸ್ ಸ್ವಾಗತಿಸಿದರು. ನವೀನ್ಚಂದ್ರ ಶೆಟ್ಟಿ ವಂದಿಸಿದರು.

ವರದಿ: ಗೋಪಾಲ ಅಂಚನ್