ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ-ವಿಶೇಷ ಅಪ್ಪದ ಪೂಜೆ

ವಾಮದಪದವು: ಬಂಟ್ವಾಳ ತಾಲೂಕಿನ
ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀ ಗಣಪತಿ ದೇವರಿಗೆ ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಇವರ ಪೌರೋಹಿತ್ಯದಲ್ಲಿ ವಿಶೇಷ ಅಪ್ಪದ ಪೂಜೆ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಕಲ್ಲುಕೊಡಂಗೆ, ಅರ್ಚಕ ಅನಂತ ಮಹಿಮ ಮುಚ್ಚಿಂತ್ತಾಯ,ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮೋಹನ್ ದಾಸ್ ಗಟ್ಟಿ,ದಯಾನಂದ ಎಸ್.ಎರ್ಮೆನಾಡು, ದೇವಿಪ್ರಸಾದ್ ಶೆಟ್ಟಿ ಪಾಲೆದಮರ,ಹರ್ಷಿಣಿ ಪುಷ್ಪಾನಂದ,ರಮಣಿ ರೈ, ಪ್ರಮುಖರಾದ ಪ್ರಮುಖರಾದ ಪುರುಷೊತ್ತಮ ಶೆಟ್ಟಿ ವಾಮದಪದವು,ದಿನೇಶ್ ಶೆಟ್ಟಿ ದಂಬೆದಾರು, ಶ್ಯಾಮ್ ಪ್ರಸಾದ್ ಪೂಂಜ, ರವಿರಾಮ ಶೆಟ್ಟಿ ಕಂಚಾರು,ಪುಷ್ಪ ರಾಮಣ್ಣ ಪೂಜಾರಿ ಗಂಟಾರಬೆಟ್ಟು,ಮುತ್ತಮ್ಮ ಮೂಲ್ಯ ಕೊಟ್ಟಾರಿಬೆಟ್ಟು, ಪ್ರಕಾಶ್ ಶೆಟ್ಟಿ ಹಲೆಕ್ಕಿ,ಉಮೇಶ್ ಶೆಟ್ಟಿ ಭಂಡಾರಿಬೆಟ್ಟು ಸಹಿತ ಮಾಗಣೆಯ ಭಕ್ತಾದಿಗಳು‌ ಪಾಲ್ಗೊಂಡರು.