ಚೆನ್ನೈತ್ತೋಡಿ: ಅಂಬೇಡ್ಕರ್ ಸಭಾಭವನ ಉದ್ಘಾಟನೆ

ವಾಮದಪದವು: ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಮೊಗರು ಗ್ರಾಮದ ಬಸ್ತಿಕೋಡಿ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ.ಆರ್.ಅಂಬೇಡ್ಕರ್ ಸಭಾಭವನ ಮಂಗಳವಾರ ಲೋಕಾರ್ಪಣೆಗೊಂಡಿತು.


2016-17ನೇ ಸಾಲಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಶಿಫಾರಸ್ಸಿನ ಮೇರೆಗೆ ರಾಜ್ಯ ವಲಯದ 50ಲಕ್ಷ ಅನುದಾನದಲ್ಲಿ ಈ ಸಭಾಭವನ ಮಂಜೂರಾತಿಗೊಂಡು ನಿರ್ಮಾಣಗೊಂಡಿತ್ತು.
ನೂತನ ಸಭಾಭವನವನ್ನು ಚೆನ್ನೈತ್ತೋಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿರಾಜೇಂದ್ರ ಉದ್ಘಾಟಿಸಿದರು.
ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಗ್ರಾಮ ಪಂಚಾಯತು ಸದಸ್ಯರು ಉಪಸ್ಥಿತರಿದ್ದರು.