ಸಿದ್ಧಕಟ್ಟೆ ಪರಿಸರದಲ್ಲಿ ಆತಂಕದ ವಾತಾವರಣ- ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡವರು ಸುರಕ್ಷಿತವಾಗಿ ಮನೆ ಸೇರಲು ಪ್ರಾರ್ಥನೆ

ಯುವಧ್ವನಿ ಸ್ಪೆಷಲ್ ನ್ಯೂಸ್:

ತನ್ನ ತಮ್ಮ ಜೆರೊಮ್ ಸಿಕ್ವೇರಾ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವುದರಿAದ ಸಿದ್ಧಕಟ್ಟೆ ಕಲ್ಕುರಿಯ ಬೆರ್ನಾಡ್ ಸಿಕ್ವೇರಾ ಅವರ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಮನೆ ಮಂದಿ, ಕುಟುಂಬಸ್ಥರು ಗಾಬರಿಗೊಂಡಿದ್ದು ಜೆರೊಮ್ ಸಿಕ್ವೇರಾ ಅವರು ಸುರಕ್ಷಿತವಾಗಿ ಮನೆ ಸೇರುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಜತೆಯಲ್ಲಿ ಅವರು ಸುರಕ್ಷಿತವಾಗಿ ಮನೆ ಸೇರುವಂತಾಗಲು ಪ್ರಾರ್ಥನೆ ಸಲ್ಲಿಸುವಂತೆ ಮನೆ ಮಂದಿ ಮಾಡಿದ ಸಂದೇಶವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಗ್ರಾಮದ ಕಲ್ಕುರಿ ನಿವಾಸಿ ಜೆರೊಮ್ ಸಿಕ್ವೇರಾ ಎಸ್.ಜೆ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು ಮಂಗಳವಾರ ರಾತ್ರಿ ತನ್ನ ಅಣ್ಣನಾದ ಬೆರ್ನಾಡ್ ಸಿಕ್ವೇರಾ ಅವರಿಗೆ ಕರೆಮಾಡಿ ತಾನು ಸುರಕ್ಷಿತವಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಊರಿಗೆ ಬರಲೆಂದು ಏರ್ ಪೋರ್ಟಿಗೆ ಬಂದಿದ್ದರೂ ಅಸಾಧ್ಯವಾಗಿ ಅಲ್ಲೇ ಬಾಕಿಯಾಗಿರುವ ಬಗ್ಗೆಯೂ ಮನೆಮಂದಿಗೆ ತಿಳಿಸಿದ್ದು ತಾನು ಸುರಕ್ಷಿತವಾಗಿ ಮನೆಗೆ ಸೇರುವಂತಾಗಲೂ ತಾವೆಲ್ಲರೂ ಪ್ರಾರ್ಥಿಸುವಂತೆ ವಿನಂತಿಸಿದ್ದಾರೆ.

‘ನಾನು ಕಾಬೂಲ್ ಬಳಿಯ ಸ್ಥಳದಲ್ಲಿ ತಂಗಿದ್ದೇನೆ. ಸುರಕ್ಷಿತವಾಗಿದ್ದೇನೆ. ಅದರೆ ಇಲ್ಲಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ನಾನು ಬೆಳಿಗ್ಗೆ ವಿಮಾನ ನಿಲ್ದಾಣ ತಲುಪಿದ್ದೆ. ಸ್ವಲ್ಪ ಹೊತ್ತಿನಲ್ಲೇ ತಾಲಿಬಾನಿಗರು ನಿಲ್ದಾಣವನ್ನು ವಶಪಡಿಸಿಕೊಂಡರು, ಜನಸಂದಣಿಯ ನಡುವೆ ನಮ್ಮ ವಸ್ತುಗಳನ್ನು ಎಳೆದುಕೊಂಡು ಬರಬೇಕಾಯಿತು. ಸಾವಿರಾರು ಜನರು ಪಲಾಯನ ಮಾಡಲು ಪ್ರಯತ್ನಿಸಿದರು, ತಾಲಿಬಾನಿಗರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಗುಂಪನ್ನು ಚದುರಿಸಿದರು. ಯಾವುದೇ ಭದ್ರತಾ ತಪಾಸಣೆ, ಬೋರ್ಡಿಂಗ್ ಪಾಸ್ ಇಲ್ಲದೇ ವಿಮಾನಗಳನ್ನು ಹತ್ತುತ್ತಿದ್ದ ದೃಶ್ಯ ಭಯಾನಕವಾಗಿತ್ತು’ ಎಂದು ವಿವರಿಸಿದ್ದ ಜೆರೊಮ್ ಸಿಕ್ವೇರಾ, ಕಾಬೂಲ್ ಮತ್ತು ಅಫ್ಘಾನಿಸ್ತಾನದ ವಿವಿಧೆಡೆ ನಡೆಯುವ ಭಯಾನಕ ದೃಶ್ಯಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.

ಕಲ್ಕುರಿ ನಿವಾಸಿಗಳಾದ ಅಲ್ಫೊನ್ ಸಿಕ್ವೇರಾ ಮತ್ತು ಐರಿನ್ ಸಿಕ್ವೇರಾ ಅವರ ಏಳು ಮಂದಿ ಮಕ್ಕಳಲ್ಲಿ ಜೆರೊಮ್ ಸಿಕ್ವೇರಾ(೫೨) ಐದನೇಯವರು. ಸಿದ್ಧಕಟ್ಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದ ಅವರು ನಂತರ ದೇಶ-ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ನಂತರ ಅಪ್ಘಾನಿಸ್ತಾನ, ಜಾರ್ಖಂಡ್, ದೆಹಲಿ ಮೊದಲಾದೆಡೆಗಳಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಐದು ವರ್ಷಗಳ ಕಾಲವಿದ್ದ ಜೆರೊಮ್ ಸಿಕ್ವೇರಾ ನಂತರ ಜಾಖಂಡ್ ನಲ್ಲಿದ್ದು ಕಳೆದ ಡಿಸೆಂಬರ್ ನಲ್ಲಿ ಸಿದ್ಧಕಟ್ಟೆಯ ಮನೆಗೆ ಬಂದಿದ್ದರು. ಮತ್ತೆ ಅಫ್ಘಾನಿಸ್ತಾನಕ್ಕೆ ಹೋಗಿದ್ದ ಅವರು ಕಳೆದ ಜನವರಿಯಿಂದ ಕಾಬೂಲ್ ನಲ್ಲಿರುವ ಅಂತರಾಷ್ಟಿçÃಯ ಎನ್‌ಜಿಓ ಸಂಸ್ಥೆಯಾದ ಜೆಸ್ಯೂಟ್ ರೆಪ್ಯೂಜಿ ಸರ್ವಿಸಸ್(ಜೆಆರ್‌ಎಸ್)ನ ಮುಖ್ಯಸ್ಥರಾಗಿ ಕರ‍್ಯನಿರ್ವಹಿಸುತ್ತಿದ್ದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ನಡೆಯುತ್ತಿರುವುದರಿಂದ ಅಲ್ಲಿರುವ ಭಾರತೀಯರನ್ನು ಭಾರತೀಯ ವಾಯುಸೇನೆ ತಾಯ್ನಾಡಿಗೆ ಕಳುಹಿಸುತ್ತಿದ್ದು ಈ ಮಧ್ಯೆ ಊರಿಗೆ ಬರಲೆಂದು ಭಾನುವಾರ ಜೆರೊಮ್ ಸಿಕ್ವೇರಾ ತನ್ನ ಸ್ನೇಹಿತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ರಾಬಟ್ ð ರೊಡ್ರಿಗಸ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರೂ ಆ ಹೊತ್ತಿಗೆ ತಾಲಿಬಾನಿಗರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ ಪರಿಣಾಮ ಊರಿಗೆ ಬರಲು ಸಾಧ್ಯವಾಗಿಲ್ಲ.

‘ಜೆರೊಮ್ ಸಿಕ್ವೇರಾ ಅವರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ. ಅವರು ಸುರಕ್ಷಿತವಾಗಿರುವುದಕ್ಕೆ ನಮ್ಮ ಮೊದಲ ಆದ್ಯತೆ. ದೇವರು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಾರೆ ಎಂಬ ಬಲವಾದ ನಂಬಿಕೆ ನಮಗಿದೆ” ಎನ್ನುತ್ತಾರೆ ಜೆರೊಮ್ ಸಿಕ್ವೇರಾ ಅವರ ಅಣ್ಣ ಬೆರ್ನಾಡ್ ಸಿಕ್ವೇರಾ.

ವರದಿ; ಗೋಪಾಲ ಅಂಚನ್, ಆಲದಪದವು 9449104318