ಮಾಣಿ-ದಡಿಕೆಮಾರು ಬಾಯಿಲ ರಸ್ತೆ- ರಮಾನಾಥ ರೈ ಪರಿಶೀಲನೆ

ಬಂಟ್ವಾಳ: ಮಾಣಿ-ದಡಿಕೆಮಾರು ಬಾಯಿಲ ರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಗುರುವಾರ ಪರಿಶೀಲನೆ ನಡೆಸಿದರು.
ತಾನು ಸಚಿವರಾಗಿದ್ದ 2017-18ನೇ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಅಪೆಂಡಿಕ್ಸ್-ಇ ನಲ್ಲಿ ಈ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಿಕೊಡಲಾಗಿದೆ. ಇದೀಗ ಕಾಮಗಾರಿ ನಡೆಯುತ್ತಿದ್ದು ಈ ಪ್ರದೇಶದ ಜನರ ಬಹುಕಾಲದ ಬೇಡಿಕೆಯೊಂದನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದು ರೈ ಹೇಳಿದರು.

ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಯಂ.ಪೆರಾಜೆ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಣಿ.ಡಿ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಇಬ್ರಾಹಿಂ.ಕೆ ಮಾಣಿ, ಸುನಂದಾ,ರಾಜ್ ಕಮಲ್ ಹೆಗ್ಡೆ,ವಲಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಪ್ರೀತಿ ಡಿನ್ನ ಪಿರೇರಾ,ಕುಶಲ ಯಂ ಪೆರಾಜೆ, ರಾಧಾಕೃಷ್ಣ ಪೂಜಾರಿ ಕೋಡಿ, ರಮೇಶ್ ದಡಿಕೆಮಾರ್, ಶಂಕರ್ ನಲಿಕೆ ಕೋಡಿ,ದಯಾನಂದ ಪೂಜಾರಿ, ವಿಕೇಶ್ ಶೆಟ್ಟಿ,ನವೀನ್ ಆಳ್ವ, ಪ್ರವೀಣ್ ಶೆಟ್ಟಿ, ನಾಗರಾಜ ಪೂಜಾರಿ, ಯೋಗೀಶ್ ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.