ಕೆದಿಮೇಲು ಮಹಾತಾಯಿ ಭಜನಾ ಮಂಡಳಿಯ ನೂತನ ಮಂದಿರೆಕ್ಕೆ ಗುದ್ದಲಿ ಪೂಜೆ (ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ

)

ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಕೆದಿಮೇಲು ಎಂಬಲ್ಲಿ ಮಹಾತಾಯಿ ಭಜನಾ ಮಂಡಳಿಯ ನೂತನ ಭಜನಾ ಮಂದಿರಕ್ಕೆ ಶಿಲನ್ಯಾಸ ನೆರವೇರಿಸಲಾಯಿತು.

ಪುರೋಹಿತರಾದ ರಾಜೇಶ್ ಹಾಗೂ ರವಿ ತಂಟೆಕ್ಕು ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಬಂಗೇರ ಕಜೆಕಾರ್, ಕಜೆಕಾರು ಮಹದೇವದೇವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಗುಣಶೇಖರ ಕೊಡಂಗೆ, ಪ್ರಮುಖರಾದ ಚಂದ್ರಶೇಖರ್ ಗುಂಡಿಮನ್ಯ, ಪುರುಷೋತ್ತಮ ಕೊಂಬೆಲ್, ಚಂದ್ರಶೇಖರ್ ಪಂಡಿತ್ ನಿಡ್ವಾಲ್ ಹಾಗೂ ಸ್ಥಳದಾನಿಗಳಾದ ದೇಜಪ್ಪ ಕೆದಿಮೇಲು ಮತ್ತಿತರರು ಉಪಸ್ಥಿತರಿದ್ದರು. ಮಂಡಳಿಯ ಅಧ್ಯಕ್ಷರಾದ ಪ್ರದೀಪ್ ದೊಡೆದ್ದು, ಉಪಾಧ್ಯಕ್ಷರಾದ ಪದ್ಮನಾಭ ಅಬುರ ಹಾಗೂ ಸಂಘದ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.