ನೇರಂಬೋಳು ಶ್ರೀ ರಕ್ತೇಶ್ವರೀ ಯುವಕ ಸಂಘದ 24ನೇ ವಾರ್ಷಿಕೋತ್ಸವ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ 24ನೇ ವಾರ್ಷಿಕೋತ್ಸವ ಸಂಘದ ವಠಾರದಲ್ಲಿ ನಡೆಯಿತು ಅಧ್ಯಕ್ಷರಾದ ಹರೀಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಸಮುದಾಯ ಆರೋಗ್ಯ ಕೇಂದ್ರ ಬಂಟ್ವಾಳ ಇದರ ವೈದ್ಯಾಧಿಕಾರಿ ಚೇತನ್ ರಾಜ್, ಶ್ರೀ ಎಂಟರ್ಪ್ರೈಸಸ್ ಮಂಗಳೂರು ಮಾಲಕರಾದ ಕಿರಣ ಹಟ್ಲೋರು ಅತಿಥಿಗಳಾಗಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ನಾಟಿವೈದ್ಯ ಈಶ್ವರ ಪೂಜಾರಿ ಇವರನ್ನು ಸನ್ಮಾನಿಸಲಾಯಿತು

. ಗೌರವ ಸಲಹೆಗಾರರಾದ ಚಂದ್ರಹಾಸ ಟೈಲರ್, ಜೊತೆ ಕಾರ್ಯದರ್ಶಿ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು. ಗೌರವ ಅಧ್ಯಕ್ಷರಾದ ಮನೋಹರ್ ನೆರಂಬೋಳು ಸ್ವಾಗತಿಸಿ ಸಂಘ 24 ವರ್ಷಗಳಿಂದ ನಡೆದು ಬಂದ ದಾರಿಯ ಬಗ್ಗೆ ಹಾಗೂ 25ನೇ ವರ್ಷದ ಕಾರ್ಯಕ್ರಮಗಳ ಯೋಜನೆ ಮತ್ತು ಯೋಚನೆಗಳ ಬಗ್ಗೆ ಮಾಹಿತಿ ನೀಡಿದರು.
ನವೀನ್ ಪೂಜಾರಿ ವಂದಿಸಿದರು. ರವೀಂದ್ರ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.