ಬಿಜೆಪಿ ಆಡಳಿತದಿಂದ ಬೇಸತ್ತು ಕುಕ್ಕಿಪ್ಪಾಡಿ, ಸಿದ್ಧಕಟ್ಟೆ, ರಾಯಿ ಪ್ರದೇಶದ ಹಲವು ಮಂದಿ ಕಾಂಗ್ರೆಸ್ ಸೇರ್ಪಡೆ

ಬಂಟ್ವಾಳ : ರಾಜ್ಯ ಹಾಗೂ ಕೇಂದ್ರ ಸರಕಾರಗಳ ಆಡಳಿತದಿಂದ ಬೇಸತ್ತು ಕುಕ್ಕಿಪ್ಪಾಡಿ, ಸಿದ್ಧಕಟ್ಟೆ, ರಾಯಿ ಪರಿಸರದ ಹಲವು ಮಂದಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


ಬಿಜೆಪಿ ಕಾರ್ಯಕರ್ತರುಗಳಾದ ಅಶೋಕ್ ಹಲಾಯಿ ಕುಕ್ಕಿಪ್ಪಾಡಿ, ಯಮುನಾ ಕುಕ್ಕಿಪಾಡಿ, ಸರೋಜ ಕುಕ್ಕಿಪಾಡಿ, ವಿವೇಕ್ ಸಿದ್ದಕಟ್ಟೆ, ಉಮೇಶ್ ಕುದ್ಕೋಳಿ, ಗಣೇಶ್ ರಾಯಿ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಿ. ಸಿ. ರೋಡ್ ನಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಸಮ್ಮುಖದಲ್ಲಿ ಇವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಈ ಸಂದರ್ಭ ಪಕ್ಷ ಸೇರಿದ ಅಶೋಕ ಹಲಾಯಿ ಮಾತನಾಡಿ
ಮಾತೃಪಕ್ಷಕ್ಕೆ ಬಂದ ಅನುಭವವಾಗಿದೆ. ಕಾರಣಾಂತರದಿಂದ ಬೇರೆ ಪಕ್ಷ ಸೇರಿದ್ದೆ. ಈಗ ವಾಸ್ತವದ ಅರಿವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಬಂಟ್ವಾಳದ ಅಭಿವೃದ್ಧಿಯ ಹರಿಕಾರ ಬಿ. ರಮಾನಾಥ ರೈ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕೆ.ಪಿ.ಸಿ.ಸಿ. ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜಗದೀಶ ಕೊಯಿಲ, ಜನಾರ್ಧನ ಚೆಂಡ್ತಿಮಾರ್, ಎಂ.ಎಸ್. ಮುಹಮ್ಮದ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ನ್ಯಾಯವಾದಿ ಸುರೇಶ್ ಬಿ. ನಾವೂರು ಮತ್ತಿತರರು ಉಪಸ್ಥಿತರಿದ್ದರು.

ಯುವಧ್ವನಿ ನ್ಯೂಸ್ ಕರ್ನಾಟಕ