ಕೊರಂಟಬೆಟ್ಟು ಬ್ರಹ್ಮಬೈದರ್ಕಳ ಕ್ಷೇತ್ರ ಫೆ.9ರಿಂದ 12 ರವರೆಗೆ ಬ್ರಹ್ಮಕುಂಭಾಭಿಷೇಕ ಮತ್ತು ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊರಂಟಬೆಟ್ಟು ಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಫೆ.9 ರಿಂದ 12ರವರೆಗೆ ಬ್ರಹ್ಮಕುಂಭಾಭಿಷೇಕ ಮತ್ತು ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.
ಫೆ.9ರಂದು ಸಂಜೆ ವಿವಿಧ ವೈಧಿಕ ಕಾರ್ಯಕ್ರಮಗಳು, ಫೆ.10 ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಪಿಲಿಚಾಮುಂಡಿ, ಬ್ರಹ್ಮಬೈದರ್ಕಳ, ಧೂಮ್ರ-ಧೂಮಾವತಿ, ಕಲ್ಕುಡ ಕಲ್ಲುರ್ಟಿ ದೈವಗಳಿಗೆ ಬ್ರಹ್ಮಕುಂಭಾಭಿಷೇಕ, ರಾತ್ರಿ ವಿಷ್ಣುಮೂರ್ತಿ ದೈವಕ್ಕೆ ನೇಮ, ಮಹಮ್ಮಾಯಿ ದೇವರ ರಾಶಿಪೂಜೆ ಮತ್ತು ನರ್ತನ ನಡೆಯಲಿದೆ.
ಫೆ.11ರಂದು ರಾತ್ರಿ ಶ್ರೀ ಕೊಡಮಣಿತ್ತಾಯ, ಪಿಲಿಚಾಮುಂಡಿ, ಧೂಮ್ರ ಧೂಮಾವತಿ, ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ,
ಫೆ.12ರಂದು ರಾತ್ರಿ ಬ್ರಹ್ಮಬೈದರ್ಕಳ ಜಾತ್ರೆ ನಡೆಯಲಿದೆ.

ವರದಿ: ಗೋಪಾಲ ಅಂಚನ್
9449104318