ದಲಿತ ಸಂಘಟನೆಗಳ ನಾಯಕರ ಸಹಿತ ದಲಿತ ಕುಟುಂಬಗಳಿಗೆ ಮಾನಸಿಕ ಹಿಂಸೆ- ಡಿಸಿಗೆ ದೂರು, ಬಂಟ್ವಾಳ ತಾಲೂಕಿನ‌ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಸಾರ್ವಜನಿಕ ರಸ್ತೆ ವಿವಾದ ಪ್ರಕರಣ

ಬಂಟ್ವಾಳ: ಖಾಸಗಿ ವ್ಯಕ್ತಿಗಳಿಂದ ಮುಚ್ಚಲ್ಪಟ್ಟಿದ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ತೆರವುಗೊಳಿಸಿದ ಪ್ರಕರಣ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ದಲಿತ ಸಂಘಟನೆಯ ನಾಯಕರ ಸಹಿತ ದಲಿತ ಕುಟುಂಬಗಳಿಗೆ ಮಾನಸಿಕ ಹಿಂಸೆ ನೀಡುತ್ತಿರುವ ವಿರುದ್ಧ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ.
ಸಾರ್ವಜನಿಕ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ನಾಯಕರ ಸಹಿತ ರಸ್ರೆಯ ಫಲಾನುಭವಿಗಳ ಮೇಲೆ ಕೆಲವರು ಅಪಪ್ರಚಾರಗೈಯ್ಯುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ದಲಿತ ಕುಟುಂಬಗಳು ಮನವಿಯಲ್ಲಿ ಒತ್ತಾಯಿಸಿದೆ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ನಾವು ವಾಸ್ತವ್ಯವಿದ್ದೇವೆ. ಇಲ್ಲಿ ನಮಗೆ ಸಂಚಾರಕ್ಕೆ ಅನುಕೂಲವಾಗುವರೇ
ಇಲ್ಲಿನ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ
ಬಾಬು ಮೇಸ್ತ್ರಿ ಎಂಬವರ


ಸಾರ್ವಜನಿಕ ರಸ್ತೆಗೆ ಜಾಗ ಬಿಟ್ಟುಕೊಟ್ಟಿದ್ದರು. ಹಲವು ವರ್ಷಗಳಿಂದ ಇಲ್ಲಿ ರಸ್ತೆ ಇದ್ದು ಸಾರ್ವಜನಿಕರಿಗೆ ಉಪಯೋಗವಾಗಿತ್ತು. ದಲಿತ ಕುಟುಂಬಗಳ ಸಹಿತ ಇತರ ಸಮುದಾಯದವರು ಈ ರಸ್ತೆಯನ್ನು ಅವಲಂಬಿಸಿದ್ದರು.
ಆದರೆ ಇಲ್ಲಿನ ನಿವಾಸಿ
ಕಾಂತಪ್ಪ ಮತ್ತು ಅವರ ಮಕ್ಕಳಾದ ಪ್ರದೀಪ್, ನವೀನ್, ಗುರುಮೂರ್ತಿ ಸಹಿತ ಇತರರು ಸೇರಿ ಇತ್ತೀಚೆಗೆ ಈ ರಸ್ತೆಗೆ ತಡೆಬೇಲಿ ಹಾಕಿ ರಸ್ತೆ ಸಂಚಾರಕ್ಕೆ ತಡೆವೊಡ್ಡಿದ್ದರು. ಇದರಿಂದ ಇಲ್ಲಿನ ದಲಿತ ಕುಟುಂಬಗಳ ಸಹಿತ ಇತರ ಮನೆಗಳವರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಬಗ್ಗೆ ನಾವು ದಲಿತ ಸಂಘಟನೆಗಳ ಪ್ರಮುಖರಿಗೆ ದೂರು ನೀಡಿದ್ದೆವು.
ಅದರಂತೆ ದಲಿತ ಸಂಘಟನೆಗಳ ಪ್ರಮುಖರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಖಾಸಗಿ ವ್ಯಕ್ತಿಗಳು ಹಾಕಿದ್ದ ತಡೆಬೇಲಿಯನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಆದರೆ ಇದೀಗ ಕಾಂತಪ್ಪ ಮತ್ತು ಅವರ ಮನೆಮಂದಿ ಸೇರಿಕೊಂಡು ಈ ಹಿಂದೆ ರಸ್ತೆಗೆ ಜಾಗ ನೀಡಿದವರು, ರಸ್ತೆಯ ಫಲಾನುಭವಿಗಳು ಹಾಗೂ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ದಲಿತ ಮುಖಂಡರ ಮೇಲೆ ವಿನಾಕಾರಣ ದೂರು ನೀಡುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಾ ಮಾನಹಾನಿಗೈಯ್ಯುತ್ತಿದ್ದಾರೆ. ಇದರಿಂದ ದಲಿತರಾದ ನಮಗೆ ನೋವುಂಟಾಗಿದ್ದು ಇದು ಇದೇ ರೀತಿ ಮುಂದುವರಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆಯೊಂದೇ ನಮಗೆ ಪರಿಹಾರವಾಗಿದೆ.
ಅದ್ದರಿಂದ ತಾವು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯ ದಲಿತ ಪ್ರಮುಖರಾದ ಚೆಲುವಯ್ಯ, ಉಮಾನಾಥ ಸಹಿತ ಇತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ದ.ಕ.ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೂ ಈ ಬಗ್ಗೆ ದೂರು ನೀಡಲಾಗಿದೆ.