ಗುಬ್ಬಚ್ಚಿ ಗೂಡು ರಮ್ಯ ನಿತ್ಯಾನಂದ ಶೆಟ್ಟಿಯವರ “ಕಂಬಳಲೋಕ” ಭಾಗ 1 ಕೃತಿ ಬಿಡುಗಡೆ ( ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕೆ ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ಗುಬ್ಬಚ್ಚಿ ಗೂಡು ರಮ್ಯ ನಿತ್ಯಾನಂದ ಶೆಟ್ಟಿಯವರ “ಕಂಬಳಲೋಕ” ಭಾಗ 1 ಕೃತಿ ಬಿಡುಗಡೆ ಇತ್ತೀಚೆಗೆ ಸರಳವಾಗಿ ನಡೆಯಿತು.

ಡಾ.ಪ್ರಭಾಚಂದ್ರ ಸಿದ್ದಕಟ್ಟೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಗೋಳಿದೊಟ್ಟು, ಶಿಕ್ಷಕ ರಾಜೇಶ್ ರಾವ್ ನೆಲ್ಯಾಡಿ, ಸರೋಜಿನಿ ಸಂಜೀವ ಶೆಟ್ಟಿ ಪೊಡುಂಬ, ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.