ವಾಮದಪದವು: 38 ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ- ಶಾಸಕ ರಾಜೇಶ್ ನಾಯ್ಕ್ ಭೇಟಿ

ವಾಮದಪದವು: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರ್ಷದ ಶ್ರೀ ಗೌರಿ- ಗಣೇಶೋತ್ಸವವು ಶುಕ್ರವಾರ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಶ್ರದ್ಧಾಭಕ್ತಿಪೂರ್ವಕ ಸಂಪನ್ನಗೊಂಡಿತು.
ಬೆಳಿಗ್ಗೆ ಧ್ವಜಾರೋಹಣ, ಗೌರಿ-ಗಣೇಶ ಮೂರ್ತಿ ಪ್ರತಿಷ್ಠೆ, ಗಣಹೋಮ, ಅಪರಾಹ್ನ ಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು.


ಬಳಿಕ ಭಜನಾ ಕಾರ್ಯಕ್ರಮ, ಧ್ವಜಾವರೋಹಣ, ವಿಸರ್ಜನಾ ಪೂಜೆ ನಡೆದು ಮೂರ್ತಿಯನ್ನು ವಿದ್ಯುಕ್ತವಾಗಿ ಜಲಸ್ಥಂಬನಗೊಳಿಸಲಾಯಿತು.

ಶಾಸಕರ ಭೇಟಿ:

ಉತ್ಸವದಲ್ಲಿ‌ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಸಮಿತಿ ಆಧ್ಯಕ್ಷ ಸುಬ್ಬಣ್ಣ ಶಾಸ್ತ್ರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ರಮೇಶ್ ಶೆಟ್ಟಿ ವಾಮದಪದವು, ಜಿ.ಕೆ.ಭಟ್, ದಿನೇಶ್ ಶೆಟ್ಟಿ ದಂಬೆದಾರ್, ಪ್ರಕಾಶ್ ಶೆಟ್ಟಿ, ಶ್ರೇಯಸ್ ಮೊದಲಾದವರಿದ್ದರು.