ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿದ ದಲಿತ ನಾಯಕರು
ರಸ್ತೆಯನ್ನು ಸಂಪರ್ಕ ಮುಕ್ತಗೊಳಿಸಿದ್ದಕ್ಕೆ ವ್ಯಾಪಕ ಶ್ಲಾಘನೆ

ವಾಮದಪದವು: ಖಾಸಗಿ ವ್ಯಕ್ತಿಗಳು ಆಕ್ರಮವಾಗಿ ಮುಚ್ಚಿದ್ದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ತೆರವುಗೊಳಿಸಿ ದಲಿತ ಮನೆಗಳ ಸಹಿತ ಇತರ ಕುಟುಂಬಗಳಿಗೆ ದಲಿತ ಸಂಘಟನೆಗಳ ಪ್ರಮುಖರು ನ್ಯಾಯ ಒದಗಿಸಿದ ಘಟನೆ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ನಡೆದಿದೆ. ದಲಿತ ಮುಖಂಡರ ಈ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಘಟನೆ ವಿವರ

A ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ರಸ್ತೆ ಮುಚ್ಚಲ್ಪಟ್ಟು ತೊಂದರೆಗೊಳಲಾದ ಕುಟುಂಬಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಕುಡಂಬೆಟ್ಟು ಗ್ರಾಮದ
ಹಲೆಪ್ಪಾಡಿ ಎಂಬಲ್ಲಿ ಇಲ್ಲಿನ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ
ಬಾಬು ಮೇಸ್ತ್ರಿ ಎಂಬವರು
ಸಾರ್ವಜನಿಕ ರಸ್ತೆಗೆ ಜಾಗ ಬಿಟ್ಟುಕೊಟ್ಟಿದ್ದರು. ಹಲವು ವರ್ಷಗಳಿಂದ ಇಲ್ಲಿ ರಸ್ತೆ ಇದ್ದು ಸಾರ್ವಜನಿಕರ ಉಪಯೋಗವಾಗಿತ್ತು. ದಲಿತ ಕುಟುಂಬಗಳ ಸಹಿತ ಇತರ ಸಮುದಾಯದವರು ಈ ರಸ್ತೆಯನ್ನು ಅವಲಂಬಿಸಿದ್ದರು. ಆದರೆ ಇಲ್ಲಿನ ನಿವಾಸಿ ದಲಿತ ಸಮುದಾಯದ
ಕಾಂತಪ್ಪ ಮತ್ತು ಮಕ್ಕಳಾದ ಪ್ರದೀಪ್, ನವೀನ್, ಗುರುಮೂರ್ತಿ ಸಹಿತ ಇತರರು ಸೇರಿ ಈ ರಸ್ತೆಗೆ ತಡೆಬೇಲಿ ಹಾಕಿದ್ದರು. ಇದರಿಂದ ಇಲ್ಲಿನ ದಲಿತ ಕುಟುಂಬಗಳ ಸಹಿತ ಇತರ ಮನೆಗಳವರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಬಗ್ಗೆ ಬಾಬು ಮೇಸ್ತ್ರಿಯವರ ಮಗ ಚೆಲುವಯ್ಯ, ಸ್ಥಳೀಯ ನಿವಾಸಿ ಉಮಾನಾಥ ಸಹಿತ ಇತರರು ದಲಿತ ಸಂಘಟನೆಗಳ ಪ್ರಮುಖರಿಗೆ ದೂರು ನೀಡಿದ್ದರು.
ಅದರಂತೆ ದಲಿತ ಸಂಘಟನೆಗಳ ಪ್ರಮುಖರಾದ ಜನಾರ್ಧನ ಚೆಂಡ್ತಿಮಾರು, ಶೇಖರ್ ಕುಕ್ಕೇಡಿ, ಉಮೇಶ್ ಕೃಷ್ಣಾಪುರ, ಗಂಗಯ್ಯ ಡಿ.ಎನ್. ಇರ್ವತ್ತೂರು, ಲೋಕೇಶ್ ಕುಂಟಾಲಪಲ್ಕೆ ಮತ್ತಿತರರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಖಾಸಗಿ ವ್ಯಕ್ತಿಗಳು ಹಾಕಿದ್ದ ತಡೆಬೇಲಿಯನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಇದರಿಂದಾಗಿ ಸ್ಥಳೀಯ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

ಆರೋಪ ಸತ್ಯಕ್ಕೆ ದೂರ:

ಆದರೆ ದಲಿತ ಮುಖಂಡರು ಮೇಲ್ವರ್ಗದವರ ಪರ ನಿಂತು ದಲಿತ ಕುಟುಂಬಗಳಿಗೆ ಅನ್ಯಾಯ ಮಾಡಿದ್ದಾರೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ದಲಿತರೇ ಬಿಟ್ಟು ಕೊಟ್ಟ ರಸ್ತೆಯನ್ನು ಇದೀಗ ದಲಿತ ಕುಟುಂಬಗಳಿಗೆ ಬಿಟ್ಟುಕೊಡುವ ಮೂಲಕ ದಲಿತ ಸಂಘಟನೆಗಳ ನಾಯಕರು ಮಾನವೀಯತೆ ಮೆರೆದಿದ್ದಾರೆ ಎಂದು ಸ್ಥಳೀಯ ದಲಿತ ಕುಟುಂಬಗಳ ಸದಸ್ಯರು ಸ್ಪಷ್ಟಪಡಿಸಿದ್ದಾರೆ.